Monday 1 April 2013

(ದಾಟಿ-ತಾಯಿ ಶಾರದೆ ಲೋಕ ಪೂಜಿತೆ) ಮತ್ತೆ ಬಂದಿದೆ ಮುದವ ತಂದಿದೆ ನವಯುಗಾದಿಯು ಇಂದಿದೆ ಬೇವು ಬೆಲ್ಲದ ತೆರದಿ ಜೀವನ ಎಂಬಸಾರವ ಸಾರಿದೆ ನೋವು ನಲಿವಿನ ನಡುವೆ ಜೀವನ ಎಂಬುದನು ನೀವ್ತಿಳಿಯಿರಿ ನೋವನೆಲ್ಲನು ಮರೆತು ಮುಂದಕೆ ಸುಖವ ಅರೆಸುತ ಸಾಗಿರಿ ತಳಿರು ಚಿಗುರಿದೆ ಮಾವು ತೆಂಗಲಿ ಪ್ರಕೃತಿ ನೂತನವಾಗಿದೆ ಹಳೆಯ ಎಲೆಗಳು ಉದುರಿವೇ ನವ ತಳಿರು ಮರದಲಿ ಚಿಗುರಿದೇ ಅದರ ತೆರದಲಿ ನಮ್ಮ ಬದುಕಲಿ ವರುಷ ಒಂದು ಸಂದಿದೆ ಹಳತು ಹಿಂದಿದೆ ಹೊಸತು ಮುಂದಿದೆ ಅದುವೇ ವರುಷ ನಂದನ ಬಂದಿದೆ ನವ ಯುಗಾದಿಯು ತಂದಿದೆ ನಮಗ್ ಹರುಷವ ಶುಭವ ತರಲಿ ನಮಗೆ ಎಂದು ಭಕ್ತಿ ಭಾವದಿ ಬೇಡುವ ಎಲ್ಲರಿಗೂ ಈ ನಂದನ ಸಂವತ್ಸರದ ಯುಗಾದಿಯು ಶುಭವನ್ನು ತರಲಿ ಎಂದು ಆಶಿಸುವ ನಿಮ್ಮ ಮಿತ್ರ- ಅನಂತ ಭಟ್ಟ

No comments:

Post a Comment