Saturday 30 July 2011

ಕದ್ದ ಜೊಕು ಜೊಕಾಲಿ

1)ರಾಂ ಭಟ್ರು ಮನೆ ಮಾಣಿಗೆ FM ಕೇಳ ಚಟ. ರೇಡಿಯೋ ತಗಂಡು Toiletಗೆ ಹೋಗಿ ಬಂದ.
ಅವ್ನ ಹೆಂಡ್ತಿ : ಹಾಡು ಚನ್ನಾಗಿತ್ತಾ?
ಮಾಣಿ : ಬೋ...ಮಕ್ಕಳು ಜನ ಗಣ ಮನ ಹಾಕಿದ. ಯಲ್ಲಾ ನಿತ್ಕಂಡೇ ಮಾಡಕ್ಕಾತು.! ದರಿದ್ರದವು
2)ತವರು ಮನೆಗೆ ಹೊಪಕಾದ್ರೆ ಹೆಂಡತಿ ಗಂಡನಿಗೆ ಅಡುಗೆ ಮಾಡ ವಿಧಾನ ಹೇಳಿಕೊಟ್ತು,
ಎಲ್ಲಾ ತಯಾರಿಸಿ ಗಂಡ ಹೆಂಡತಿಗೆ ಫೋನ್ ಮಾಡಿ ಕೇಳಿದ "ತಲೆ ಕೂದ್ಲು ಹಾಕದು ಯಾವಾಗ್ಲೆ..! "
3)ಬೆಕ್ಕು : ನಿನಗೆ ಎಷ್ಟು ವರ್ಷ?
ಆನೆ : ಐದು ವರ್ಷ.
ಬೆಕ್ಕು : ಐದು ವರ್ಷನಾ? ಮತ್ತೆ ನಿನ್ನ ದೇಹ ಇಷ್ಟು ದೊಡ್ಡದಾಗಿದೆ?
ಆನೆ : ನಾನು ಕಾಂಪ್ಲಾನ್ ಬಾಯ್! ನಿನಗೆ?
ಬೆಕ್ಕು : ನನಗೆ 30 ವರ್ಷ.
ಆನೆ : 30 ವರ್ಷನಾ? ಮತ್ತೆ ಯಾಕೆ ನಿನ್ನ ದೇಹ ಇಷ್ಟು ಚಿಕ್ಕದಾಗಿದೆ?
ಬೆಕ್ಕು : ನಾನು ಸಂತೂರ್ ಗರ್ಲ್!

4)ಗುಂಡ : ಸಾರ್ ನನ್ನ ಚೆಕ್ ಬುಕ್ ಕಳೆದು ಹೋಗಿದೆ.
ಬ್ಯಾಂಕ್ ಮೇನೇಜರ್ : ಹುಷಾರಪ್ಪಾ.. ಯಾರಾದ್ರೂ ನಿನ್ನ ಸೈನ್ ಫೋರ್ಜರಿ ಮಾಡಿಬಿಟ್ಟಾರು...
ಗುಂಡ : ಏನ್ ಸಾರ್, ನನ್ನನೇನು ಅಷ್ಟು ದಡ್ಡಾ ಅನ್ಕೊಂಡ್ರಾ.. ಎಲ್ಲಾ ಚೆಕ್ ಗೆ ಆಗ್ಲೇ ಸೈನ್ ಮಾಡಿದ್ದೇನೆ!

5)ಗುಂಡ ತಿಂಡಿ ತಿನ್ನಲು ದರ್ಶಿನಿಗೆ ಹೋದ...
ಗುಂಡ : ಯಾಕೆ ನೀವು ಪ್ರತೀ ಮಂಗಳವಾರ ನಿಮ್ಮ ಹೊಟೇಲ್ ಗೆ ರಜಾ ಕೊಡ್ತೀರಾ?
ಹೋಟೆಲ್ ಮಾಲೀಕ : ಯಾಕೆಂದರೆ.. ಅವತ್ತೊಂದಿನ ಮಾತ್ರ ಎಲ್ಲಾ ಪಾತ್ರೆಗಳನ್ನು ತೊಳಿತೀವಿ.

6)ನೀರಿನ ಸಾಗರವನ್ನು ದಾಟಲು 'ತೆಪ್ಪ' ಇರಬೇಕು...
ವಾಹ್ ವಾಹ್ ವಾಹ್...
ನೀರಿನ ಸಾಗರವನ್ನು ದಾಟಲು 'ತೆಪ್ಪ' ಇರಬೇಕು...
ಸಂಸಾರ ಸಾಗರವನ್ನು ದಾಟಲು ತೆಪ್ಪಗಿರಬೇಕು!
7)ರಾಜಕಾರಿಣಿಯಾಗಿ ಬದಲಾದ ಗುಂಡನ ಮಡದಿ ಸತತವಾಗಿ ಐದನೇ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಈ ಬಾರಿಯಾದರೂ ಗಂಡು ಮಗುವಿನ ತಂದೆಯಾಗಿ ಮಗನನ್ನು ಭವಿಷ್ಯದ ರಾಜಕಾರಿಣಿಯಾಗಿ ರೂಪಿಸಬೇಕೆನ್ನುವ ಗುಂಡನಿಗೆ ಭಾರೀ ನಿರಾಶೆಯಾಗುತ್ತದೆ. ಈ ಬಾರಿಯೂ ಹೆಣ್ಣು ಮಗುವಿನ ತಂದೆಯಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ...

ಗುಂಡ : ಇದು ವಿರೋಧ ಪಕ್ಷದವರ ವ್ಯವಸ್ಥಿತ ಪಿತೂರಿ. ನನ್ನ ಮದುವೆಯಾದಾಗಿನಿಂದ ವಿರೋಧ ಪಕ್ಷದವರು ನೆಮ್ಮದಿಯಿಂದ ಕೆಲಸ ಮಾಡಲು ಬಿಡಲಿಲ್ಲ. ಹುಟ್ಟು ಹೋರಾಟಗಾರನಾದ ನಾನು ಸುಮ್ಮನೆ ಕೂರುವವನಲ್ಲ, ಮತ್ತೆ ಮಗುದೊಮ್ಮೆ ಪ್ರಯತ್ನಿಸುತ್ತೇನೆ. ಪಕ್ಷದ ವರಿಷ್ಠರ ಬಳಿ ಈ ವಿಷಯದ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ. ಅಗತ್ಯ ಬಿದ್ದರೆ ರಾಷ್ಟ್ರಪತಿ ಬಳಿ ನಿಯೋಗ ಕರೆದೊಯ್ಯುತ್ತೇನೆ. ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರು ಧರಣಿ ನಡೆಸಲು ಮುಂದಾಗಿದ್ದಾರೆ. ಅಗತ್ಯ ಬಿದ್ದರೆ ಬಂದ್ ಗೆ ಕರೆ ನೀಡಲು ಚಿಂತಿಸಲಾಗುತ್ತಿದೆ.

ವಿರೋಧಪಕ್ಷದ ಸದಸ್ಯ : ಗುಂಡವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಬಗ್ಗೆ ಸಿಬಿಐ ತನಿಖೆಗೂ ನಾವು ಸಿದ್ದರಿದ್ದೇವೆ. ಈ ಸಂಬಂಧ ವಿಡಿಯೋ ಸಾಕ್ಷಿ ಏನಾದರೂ ಇದ್ದರೆ ಬಹಿರಂಗ ಪಡಿಸಲಿ. ಇವರ ಹೇಳಿಕೆ ನಿಜವಾದರೆ ಮತ್ತು ರುಜುವಾತು ಪಡಿಸಿದರೆ ಪಕ್ಷದ ಪರಿಹಾರ ನಿಧಿಯಿಂದ ಹೆರಿಗೆ ಖರ್ಚನ್ನು ನಾವೇ ಭರಿಸುತ್ತೇವೆ.

ಗುಂಡ : ವಿಡಿಯೋ ಸಾಕ್ಷಿ ಬಹಿರಂಗ ಪಡಿಸಲು ಇದು ನಿತ್ಯಾನಂದನ ಹಗರಣವಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಗಂಡಸರು ನಿಮ್ಮಲ್ಲಿಲ್ಲವೇ?

ವಿರೋಧಪಕ್ಷದ ಸದಸ್ಯ : ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ತಿಂಗಳು ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಕೂಲಂಕುಷವಾಗಿ ಸದಸ್ಯರ ಬಳಿ ಈ ಬಗ್ಗೆ ಚರ್ಚಿಸಿ ಹೇಳಿಕೆ ನೀಡಲಾಗುವುದು. ತಪ್ಪಿತಸ್ಥರಿದ್ದರೆ ಮುಲಾಜಿಲ್ಲದೆ ಅವರ ಹೆಸರನ್ನು ಬಹಿರಂಗಪಡಿಸುತ್ತೇವೆ.

8)ಪ್ರಪಂಚದ 3 ಅತಿಶೀಘ್ರ ಕಮ್ಯೂನಿಕೇಶನ್ ಯಾವುದೆಂದರೆ -
ಟೆಲಿ - ಫೋನ್
ಟೆಲಿ - ವಿಷನ್
ಟೆಲ್ ಟು ವುಮೆನ್!

9)ಮಗ : ಅಮ್ಮಾ ಸ್ಕೂಲ್ ನಲ್ಲಿ ನನಗೆ ತುಂಬಾ ಹೊಡಿತಾರಮ್ಮ.
ತಾಯಿ : ಯಾಕೋ, ಸ್ಕೂಲ್ ನಲ್ಲಿ ತುಂಬಾ ಗಲಾಟೆ ಮಾಡುತ್ತೀಯಾ?
ಮಗ : ಇಲ್ಲಾಮ್ಮಾ. ನನ್ ಪಾಡಿಗೆ ಮಲಗಿದರೂ ಎಬ್ಬಿಸಿ ಹೊಡಿತಾರಮ್ಮಾ!
10)ವೈದ್ಯರೊಬ್ಬರು ತನ್ನ ಹೊಸ ಆಸ್ಪತ್ರೆಗೆ ಜಾಹೀರಾತು ನೀಡಲು ಒಂದು ಒಳ್ಳೆ ಪಂಚ್ ಡೈಲಾಗ್ ಹೇಳಿ ಎಂದು ನರ್ಸ್ ಗಳಲ್ಲಿ ಸಲಹೆ ಕೇಳುತ್ತಾರೆ.

ನರ್ಸ್ ಗಳು ವಿವಿಧ ಸಲಹೆ ನೀಡುತ್ತಾರೆ. ಆದರೆ ಒಂದು ನರ್ಸ್ ನೀಡಿದ ಪಂಚ್ ಡೈಲಾಗ್ ಸಲಹೆಯಿಂದ ಆಕೆಯ ಕೆಲಸಕ್ಕೆ ಸಂಚಕಾರ ಬರುತ್ತದೆ. ಆಕೆ ಸಲಹೆ ನೀಡಿದ ಪಂಚ್ ಡೈಲಾಗ್ ಸಲಹೆ ಏನು ಗೊತ್ತೇ?

"ಕರ್ಕೊಂಡು ಬನ್ನಿ... ಹೊತ್ಕೊಂಡು ಹೋಗೀ.. "
11)ಬೆಟ್ಟದ ತುದಿಯಿಂದ ಗುಂಡ ಒಂದು ಹುಡುಗಿಯನ್ನು ತಳ್ಳಿ ಸಾಯಿಸುತ್ತಾನೆ.
ಜಡ್ಜ್ : ಯಾಕೋ ಆ ಹುಡುಗಿಯನ್ನು ಸಾಯಿಸಿದೆ?
ಗುಂಡ: ನಾನು ಅವಳ ಹೆಸರನ್ನು ಕೇಳಿದೆ ಸಾರ್, ಅವಳು ಪುಷ್ಪಾಂತ (ಪುಷ್ ಪಾ) ಹೇಳಿದಳು. ಅದಕ್ಕೆ ತಳ್ಳಿದೆ.
ಜಡ್ಜ್: ಅಯ್ಯೋ ಪಾಪಿ..


12)ಪಾರ್ಕ್ ನಲ್ಲಿ ಇಬ್ಬರು ಗೆಳತಿಯರು ಚರ್ಚಿಸುತ್ತಿದರು
ಒಬ್ಬಾಕೆ: ಅಲ್ಲಿ ಕೂತಿದ್ದಾನೆ ನೋಡು, ಅವನು ಬಹಳ ಶ್ರೀಮಂತ.
ಇನ್ನೊಬ್ಬಾಕೆ: ಅದೇಗೆ ಹೇಳ್ತೀಯಾ.. ನಿನಗೆ ಹೇಗೆ ಗೊತ್ತು?
ಒಬ್ಬಾಕೆ: ಅವನ ಕಡೆಯಿಂದ ಈರುಳ್ಳಿ ವಾಸನೆ ಬರುತ್ತಿದೆ..


13)ಗುಂಡ: ಸಂತೋಷದ ಸುದ್ದಿ, 2012 ಕ್ಕೆ ಪ್ರಳಯ ಆಗೋಲ್ಲಾ.
ತಿಮ್ಮ: ಅದೇಗೆ, ಏನು ಸಾಕ್ಷಿ?
ಗುಂಡ: ನಾನು ಮೊನ್ನೆ ತಗೊಂಡ ಟೊಮ್ಯಾಟೋ ಸಾಸ್ ಸಾಕ್ಷಿ, ಅದರಲ್ಲಿ ಎಕ್ಷ್ಪೈರಿ ಡೇಟ್ 2013 ಅಂತಾ ಇದೆ.


14)ಹುಡುಗ, ಹುಡುಗಿ ಪಾರ್ಕ್ ನಲ್ಲಿ ಕೂತಿದ್ದರು. ಮೆತ್ತಗೆ ಹುಡುಗ ಹುಡುಗಿಯ ಮೈ ಟಚ್ ಮಾಡುತ್ತಾನೆ
ಹುಡುಗಿ: ನನ್ನ ಮೈ ಮುಟ್ಟ ಬೇಡ, ಅದೆಲ್ಲಾ ಏನಿದ್ದರೂ ಮದುವೆಯಾದ ಮೇಲೆ
ಹುಡುಗ: ಓಕೆ, ಹಾಗಾದ್ರೆ ನಿನ್ನ ಮದುವೆ ಆದ ಮೇಲೆ ಕರೀ..
 
15)ಪ್ರಸಿದ್ಧ ಲೇಖಕ ಮೆಚ್ಚಿ ಮದುವೆಯಾದ ಮಡದಿಗೆ ಸೋಡಾಚೀಟಿ ಕೊಟ್ಟು ಡೈವೋರ್ಸ್ ಪಡೆದು ಬಿಟ್ಟ. ಅವನ ಬೆನ್ನು ಬಿದ್ದ ಪತ್ರಕರ್ತರು ಕೇಳಿದ ಪ್ರಶ್ನೆಗೆ "ಸಾರ್, ವಿಚ್ಛೇದನ ಪಡೆಯಲು ಮೂಲ ಕಾರಣ ಏನು?" ಲೇಖಕ ಅವನು ಕೊಟ್ಟ ಕಡೆಯ ಉತ್ತರ ಹೀಗಿತ್ತು" ಮದುವೆ".
16)ಮಗ : ಅಪ್ಪಾ.. ನಾಳೆ ನನ್ನ ಗರ್ಲ್ ಫ್ರೆಂಡ್ ಬರ್ತಡೇ. ಏನು ಗಿಫ್ಟ್ ಕೊಡ್ಲಪ್ಪಾ?
ತಂದೆ : ನೋಡೋಕೆ ಹೇಗಿದಾಳೆ?
ಮಗ : ಸಖತ್ತಾಗಿದ್ದಾಳೆ.
ತಂದೆ : ಹಾಗಾದರೆ ನನ್ನ ಮೊಬೈಲ್ ನಂಬರ್ ಕೊಡು!


17)ಒಂದು ಹುಡುಗಿ ತನ್ನ ತೂಕ ಚೆಕ್ ಮಾಡ್ತಿದ್ಳು - 58 ಕೆಜಿ
ಚಪ್ಪಲಿ ತೆಗೆದು ಚೆಕ್ ಮಾಡಿದಾಗ - 56 ಕೆಜಿ
ಜರ್ಕಿನ್ ತೆಗೆದು ಚೆಕ್ ಮಾಡಿದಾಗ - 53 ಕೆಜಿ
ದುಪಟ್ಟಾ ತೆಗೆದು ಚೆಕ್ ಮಾಡಿದಾಗ - 52 ಕೆಜಿ
ಅಷ್ಟರಲ್ಲಿ ಅವಳ ಒಂದು ರುಪಾಯಿ ನಾಣ್ಯಗಳು ಖಾಲಿ ಆಯಿತು..
ಹಿಂದೆ ವೈಟ್ ಚೆಕ್ ಮಾಡೋಕೆ ನಿಂತಿದ್ದ ತರ್ಲೆ ಹುಡುಗನೊಬ್ಬ ''ನೀನು ಮುಂದುವರಿಸು ನನ್ನ ಬಳಿ ಬೇಕಾದಷ್ಟು ಕಾಯಿನ್ ಗಳಿವೆ!"


18)ಟೀಚರ್ : ಮಕ್ಕಳೇ ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಏನಾದರೂ ಡೌಟ್ ಇದ್ದಾರೆ ಕೇಳಿ..
ಗುಂಡ : ಮಿಸ್.. ಎಕ್ಸಾಮ್ ಪೇಪರ್ ಎಲ್ಲಿ ಪ್ರಿಂಟ್ ಆಗುತ್ತೆ?


19)ಗುಂಡ : ನಾನು ಒಂದು ದಿನ ಪೇಪರ್ ನಲ್ಲಿ ಓದಿದ್ದೆ.. ಕುಡಿಯೋದು ಜೀವಕ್ಕೆ ಹಾನಿಕರಯೆಂದು .. ಆವತ್ತಿನಿಂದ ಬಿಟ್ ಬಿಟ್ಟೆ..
ತಿಮ್ಮ : ಏನು ಬಿಟ್ ಬಿಟ್ಬಿಟ್ಟೆ?
ಗುಂಡ : ಪೇಪರ್ ಓದೋದನ್ನಾ!


20)ಜಗತ್ತಿನಲ್ಲಿ ಲಕ್ಷಾಂತರ ಮಂದಿ ಪ್ರೇಮ ಪತ್ರ ಬರೆಯುತ್ತಾರೆ..ಆದರೆ ಹೆಚ್ಚಿನವರು ಮೊದಲ ಪ್ರೇಮಪತ್ರವನ್ನು ನನಗೆ ಕಳುಹಿಸುತ್ತಾರೆ..
ನಾನು ಯಾರಿರಬಹುದು... ಊಹಿಸಿ....
...
....
ಡಸ್ಟ್ ಬಿನ್!
21)ಗುಂಡನ ಪತ್ನಿ ಗುಂಡಿ : ಈ ವಾರ ಫುಲ್ ಸಿನಿಮಾಗೆ ಹೋಗೋಣಾ.. ಬರುವ ವಾರ ಫುಲ್ ಶಾಪಿಂಗ್ ಮಾಡೋಣ..
ಗುಂಡ : ಅದರ ಮುಂದಿನ ವಾರ ಫುಲ್ ದೇವಸ್ಥಾನಕ್ಕೆ ಹೋಗೋಣಾ.
ಗುಂಡಿ : ಯಾಕೆ?
ಗುಂಡ : ಭಿಕ್ಷೆ ಬೇಡೋಕೆ!

22)ಗುಂಡ ಫೋಟೋ ತೆಗ್ಸೋಕೆ ಸ್ಟುಡಿಯೋಗೆ ಹೋದ..
ಗುಂಡ : ಸರ್ ನಿಮ್ಮಲ್ಲಿ.. ಪಾಸ್ಪೋರ್ಟ್ ಸೈಜ್ ಫೋಟೋ ನಲ್ಲಿ ಚಪ್ಪಲಿ ತನಕ ಫೋಟೋ ತೆಗೆಯೋಕಾಗುತ್ತಾ?
ಅಂಗಡಿ ಮಾಲಿಕ : ಬರುತ್ತೆ, ಆದ್ರೆ ನೀವು ಚಪ್ಪಲಿ ತಲೆಮೇಲೆ ಇಟ್ಕೊಂಡ್ರೆ ಮಾತ್ರಾ!

23)ಗುಂಡ : ನೋಡೋ ತಿಮ್ಮ, ಆ ಶಿವಣ್ಣನಿಗೆ ಎಷ್ಟು ಹೇಳಿದ್ರೂ ಇಲ್ಲ, ನಮ್ಮ ದೇಶ ಹಿಂದೂಸ್ಥಾನ್ ಬಿಟ್ಟು ಅಮೇರಿಕಾದಲ್ಲಿ ಸೆಟ್ಲ್ ಆಗುತ್ತಾನಂತೆ ಕಣೋ...
ತಿಮ್ಮ : ಹೌದಾ, ಅವನಿಗೆ ಹೋಗೋ ಮುಂಚೆ ಸರಿಯಾದ ಅಡ್ಡ ಹೆಸ್ರು ಇಟ್ಟು ಕಳುಹಿಸಬೇಕು. ಏನೂಂತಾ ಇಡೋಣ ಹೇಳು?
ಗುಂಡ : 'ಹಿಂದೂಸ್ಥಾನ್ ಲೀವರ್' ಅಂತ ಇಟ್ಟರೆ?

24)ಗುಂಡ : ಒಂದು ತಿಂಗಳ ನಂತರ ನಾನು ವರದಕ್ಷಿಣೆ ವಿರುದ್ದ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇನೆ.
ತಿಮ್ಮ : ಒಂದು ತಿಂಗಳು ಬಿಟ್ಟು ಯಾಕೆ? ಇಂದಿನಿಂದಲೇ ಶುರು ಮಾಡು.
ಗುಂಡ : ಯಾಕೆಂದರೆ, ಈ ತಿಂಗಳು ನನ್ನ ಮತ್ತು ಅದಾದ ಹತ್ತು ದಿನದಲ್ಲಿ ನನ್ನ ಸಹೋದರನ ಮದುವೆ ಇದೆ.
 
 
 

  • 25)
    ಮಾಣಿ ಕೂಸಿಗೆ : ನೀ ಖಾಲಿ ಹೊಟ್ಟೆಲಿ ಎಷ್ಟು ಸೇಬು ತಿಂತೆ?
    ಕೂಸು: 4 ತಿನ್ಲಕ್ಕು .
    ಮಾಣಿ : ಹಾ ಹ್ಹಾ .. ಇಲ್ಲೆ. ನೀ ಒಂದು ತಿಂದಮೇಲೆ ಹೊಟ್ಟೆ ಖಾಲಿ ಇರ್ತಿಲ್ಲೆ .. :) so ಖಾಲಿ ಹೊಟ್ಟೆಲಿ ಒಂದೇ ತಿನ್ಲಕ್ಕು.
    ಕೂಸು : ಹೇ ಮಸ್ತ್ ಇದ್ದಲೋ ಜೋಕು . ತಡೆ ನನ್ ಫ್ರೆಂಡ್ ಗೆ ಹೇಳ್ತೆ.
    ----------------------------------------------------
    ಕೂಸು ಇನ್ನೊಂದ್ ಕೂಸಿಗೆ
    ಕೂಸು 1 : ನೀ ಖಾಲಿ ಹೊಟ್ಟೆಲಿ ಎಷ್ಟು ಸೇಬು ತಿಂತೆ?
    ಕೂಸು 2 : 6 ತಿಂತೆ .
    ಕೂಸು 1 : ಥೋ.. ನೀ 4 ಹೇಳಿದಿದ್ರೆ ಎಷ್ಟ್ ಚೊಲೋ ಜೋಕ್ ಹೇಳ್ತಿದ್ದೆ ಗೊತ್ತಿದ್ದಾ.. ?? !!! :P
             26)ಆಪರೇಷನ್ ಕಂಡು ಪ್ರತಿಪಕ್ಷ  
              ಪರೇಷಾನ್ ಆಗಿದೆ;
              ರೇಷನ್  ಸಿಗದೆ ಬಡಜನತೆ
             ಷನ್‌ಖ ಊದುತ್ತಿದೆ;
             ಷನ್‌ಭೋ ಶಂಕರ
              ಕೇಎಸ್ಸೀಶ್ವರ
              ಎಂಥ ಗತಿ ಬಂತೋ
             ಯಡಿಯೂರ!
    27)ಕೂಸು: ಏ ನೀ ಎಂತಾ ಮಾಡ್ತ್ಯ?
    ಮಾಣಿ: ನಾ '' ಟೈಮ್ಸ್ ಆಫ್ ಇಂಡಿಯಾ'' ದಲ್ಲಿ ವರ್ಕ್ ಮಾಡ್ತಿದ್ದಿ, ಈಗ ಬಿಟ್ಟಿಗಿದ್ನೆ...
    ಕೂಸು: ಅಯ್ಯೋ ದೇವ್ರೆ, ಮಳ್ ಗೆಟ್ಟವ್ನೇಯಾ ನೀನು, ಎಂತಕ್ಕೆ ಬಿಟ್ಯಾ ಜಾಬ್ ನಾ??!
    ಮಾಣಿ:ಹೋಗೆ ಮಳ್ಳು ಬೆಳ್ಗೆ ಬೆಳ್ಗೆ ಎದ್ದು ಆ ಪೇಪರ್ ಹಾಕ ಕೆಲ್ಸ ಯಾರಿಗೆ ಬೇಕೇ ಮಾರಾಯ್ತಿ..........??!!!;);)
    28)ಮಗ : ಅಪ್ಪಾ, ಏನೂ ಕೆಲಸ ಮಾಡದೆ ದುಡಿಮೆ ಮಾಡೋ ಉದ್ಯೋಗ ಯಾವುದಾದ್ರೂ ಇದ್ರೆ ಹೇಳಪ್ಪ ?

    ಅಪ್ಪ : ನಂಗೊತ್ತಿಲ್ಲ ಮಗನೇ, ಕೆಲಸವನ್ನೇ ಮಾಡದೆ ಹಣ ಸಿಗೋಕೆ ಹೇಗೆ ಸಾಧ್ಯ ?

    ಮಗ : ಹಾಗಲ್ಲಪ್ಪ, ನನಗೆ ಕೆಲಸ ಇರಬಾರದು. ಬೇರೆಯವರೆಲ್ಲಾ ಅವರವರ ಕೆಲಸ ಮಾಡಿಕೊಂಡು ಹೋಗ್ತಾ ಇರಬೇಕು. ನಮಗೆ ಹಣ ಬರ್ತಾ ಇರಬೇಕು.
    ...
    ಅಪ್ಪ : ಹಾಗಿದ್ದರೆ ಒಂದು ’ಸುಲಭ್ ಶೌಚಾಲಯ’ ಶುರು ಮಾಡು !!!