ಇದು ವೇದ ಸಂಸ್ಕ್ರತ ಯೋಗ ಯಕ್ಷಗಾನ ಕಲೆ ಇತ್ಯಾದಿ ಗಳನ್ನೂ ಪ್ರೋತ್ಸಾಹಿಸಿ ಅಭಿವ್ವ್ರದ್ದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಸಂಸ್ಥೆ .ಇದೀಗ ತಾನೆ ಉದಯಿಸುತ್ತಿರುವ ಈ ಸಂಸ್ಥೆಗೆ ತಮ್ಮೆಲ್ಲರ ಸಹಾಯ ಸಹಕಾರ ಆಶಿರ್ವಾದ ಅತ್ಯಗತ್ಯ .ತಮ್ಮ ಸಲಹೆ ಸೂಚನೆಗಳಿಗೆ ಆದರದ ಸ್ವಾಗತ....
Monday 1 April 2013
ಹಳೆಯ ನೋವನೆಲ್ಲ ಮರೆತು
ಮುದದಿ ಇಂದು ಎಲ್ಲ ಬೆರೆತು
ವರುಷ ಫಲವ ಕೇಳಿ ಕುಳಿತು
ಬಾಳು ಎಂಬ ಆಶಯಾ ಯುಗಾದಿಯಾ ಶುಭಾಶಯ
ಮುಂದೆ ನಮಗೆ ಶುಭವು ಇಹುದು
ಎಂದು ಕೇಳ್ದ ಫಲವ ನೆನೆದು
ಬಾಳ್ವೆಯಲ್ಲಿ ಅರ್ಥ ಇಹುದು
ಎಂಬುದಿದರ ಆಶಯಾ ಯುಗಾದಿಯಾ ಶುಭಾಶಯ
ಮಧು ಮಾಸವು ಬಂತು ನೋಡಿ
ಜೇನ ಸವಿಯ ಜೋತೆಯ ಗೂಡಿ
ಬೇವ ಕಹಿಯ ಹೊರಗೆ ದೂಡಿ
ನಿಮಗಿದೋ ಶುಭಾಶಯ ಯುಗಾದಿಯಾ ಶುಭಾಶಯ
ಆತ್ಮೀಯತೆಯಿಂದ -ಅನಂತ ಭಟ್ಟ
ನಂದನ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು..
(ದಾಟಿ-ತಾಯಿ ಶಾರದೆ ಲೋಕ ಪೂಜಿತೆ)
ಮತ್ತೆ ಬಂದಿದೆ ಮುದವ ತಂದಿದೆ ನವಯುಗಾದಿಯು ಇಂದಿದೆ
ಬೇವು ಬೆಲ್ಲದ ತೆರದಿ ಜೀವನ ಎಂಬಸಾರವ ಸಾರಿದೆ
ನೋವು ನಲಿವಿನ ನಡುವೆ ಜೀವನ ಎಂಬುದನು ನೀವ್ತಿಳಿಯಿರಿ
ನೋವನೆಲ್ಲನು ಮರೆತು ಮುಂದಕೆ ಸುಖವ ಅರೆಸುತ ಸಾಗಿರಿ
ತಳಿರು ಚಿಗುರಿದೆ ಮಾವು ತೆಂಗಲಿ ಪ್ರಕೃತಿ ನೂತನವಾಗಿದೆ
ಹಳೆಯ ಎಲೆಗಳು ಉದುರಿವೇ ನವ ತಳಿರು ಮರದಲಿ ಚಿಗುರಿದೇ
ಅದರ ತೆರದಲಿ ನಮ್ಮ ಬದುಕಲಿ ವರುಷ ಒಂದು ಸಂದಿದೆ
ಹಳತು ಹಿಂದಿದೆ ಹೊಸತು ಮುಂದಿದೆ ಅದುವೇ ವರುಷ ನಂದನ
ಬಂದಿದೆ ನವ ಯುಗಾದಿಯು ತಂದಿದೆ ನಮಗ್ ಹರುಷವ
ಶುಭವ ತರಲಿ ನಮಗೆ ಎಂದು ಭಕ್ತಿ ಭಾವದಿ ಬೇಡುವ
ಎಲ್ಲರಿಗೂ ಈ ನಂದನ ಸಂವತ್ಸರದ ಯುಗಾದಿಯು ಶುಭವನ್ನು ತರಲಿ ಎಂದು ಆಶಿಸುವ ನಿಮ್ಮ ಮಿತ್ರ- ಅನಂತ ಭಟ್ಟ
Subscribe to:
Posts (Atom)