Saturday 25 June 2011

ಆಧುನಿಕ ಸ್ವ ಘೊಶಿತವಿಚಾರವಾದಿಗಳಿಗೊಂದು ಪುಟ್ಟ ಸಲಹೆ

                  ಆಧುನಿಕ ಸ್ವ ಘೊಶಿತವಿಚಾರವಾದಿಗಳಿಗೊಂದು ಪುಟ್ಟ ಸಲಹೆ
+ಸಂಸ್ಕೃತ,ವಿಜ್ನಾನ,ಧರ್ಮ ಇವು ಪರಸ್ಪರ ಅನ್ಯೊನ್ಯ ಆಶ್ರಯ ಹೊಂದಿರುವ ವಿಚಾರಗಳೆ?
 ಭಾರತದಂತಹ ದೇಶದಲ್ಲಿ ಹೌದು ಎನ್ನಬೇಕಾಗಬಹುದು ಎಕೆಂದರೆ ಸಂಸ್ಕೃತ ಹಾಗೂ ಜಗತ್ತಿನ ಮೊದಲ ಸಾಹಿತ್ಯ ವೇದ ಎಂದರೆ ತಪ್ಪಾಗಲಾರದು.೧)ಪಾಕಿಸ್ತಾನದ ಮೆಹರ್ ಘಡ್ ಉತ್ಖನನದಲ್ಲಿ ಸರಸ್ವತಿ ನದಿಯ ದಂಡೆಯಮೇಲೆ ಕೃ.ಪೂ ೬೫೦೦ (ಅಂದರೆ ೮೬೦೦) ವರ್ಷದ ಹಿಂದೆಯೆ ವೇದ ನಾಗರೀಕತೆ ಉಛ್ರಾಯಸ್ಥಿತಿಯಲ್ಲಿತ್ತು ಎಂದು ತಿಳಿದುಬಂದಿದೆ.(ಯಾವುದು ಚರಿತ್ರೆ ಪು ಸಂ-೨) ವೇದ ಎಂಬ ಶಬ್ದವು ವಿದ್ ಜ್ನಾನೆ ಎಂಬಧಾತು ಮೂಲೀಯ. ಜ್ನಾನ ಎಂದು ಹೆಸರಿರುವ ಈ ಭಂಡಾರವೇ ಆಧುನಿಕ ಸ್ವ ಘೊಶಿತ ವಿಚಾರವಾದಿಗಳಿಗೆ ಅಜ್ನಾನವಾಗಿ ತೋರುತ್ತಿರುವುದು ಭಾರತ ದೇಶದ ವಿಪರ್ಯಾಸ... ಇದಕ್ಕೆ ಕಾರಣವೇನು? ಎಂದು ಆಲೋಚಿಸಿ....
 ಮೆಕಾಲೆ ಶಿಕ್ಷಣ..
ಈ ಶಿಕ್ಷಣ ನೀತಿಯಿಂದ ಭಾರತದ ನವ ಪೀಳಿಗೆಯನ್ನ ಬಣ್ಣದಲ್ಲಿ ಮಾತ್ರ ಭಾರತೀಯರನ್ನಾಗಿ ಉಳಿಸುತ್ತೆನೆ ಎಂಬ ಅವನ ಪತ್ರ.
ಈ ಉದ್ದೇಶದಿಂದ ಆರಂಭವಾದ ಶಿಕ್ಷಣ ಇಂದಿಗೂ ಸಾಗುತ್ತಿರುವುದು...
ವೇದ,ಸಂಸ್ಕೃತ,ಧರ್ಮದಲ್ಲಿ ಹೇಳಿದ ವಿಚಾರ ವಿಷಯಗಳೆಲ್ಲವೂ ಅವೈಜ್ನಾನಿಕ,ಅವೆಲ್ಲಾ ಮೂಢನಂಬಿಕೆಗಳು ಎಂದು ವಾದ ಮಾಡುತ್ತಾ ತಾವು ವಿಚಾರವಾದಿಗಳು ಎಂಬ ಸೋಗಿನಲ್ಲಿರುವ ಭಾರತೀಯರೆಲ್ಲರೂ ಅಂದು ಮೆಕಾಲೆ ಕಂಡ ಕನಸಿನ ನವಪೀಳಿಗೆಯ ಕೂಸುಗಳೆ ಅಲ್ಲವೇ...?
ಕೃ.ಶ ೪ ನೇ ಶತಮಾನದಲ್ಲಿಯೇ ನಲಂದ, ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳನ್ನು ಹೊಂದಿದ ಭಾರತಕ್ಕೆ ಮೆಕಾಲೆ ಶಿಕ್ಷಣದ ಅವಷ್ಯಕತೆ ಇನ್ನೂ ಇದೆಯೆ....?
ಧರ್ಮವನ್ನು& ಸಂಸ್ಕೃತ ಸಾಹಿತ್ಯವನ್ನು ಪ್ರಶ್ನಾತೀತವಾಗಿ ಅಂಗಿಕರಿಸಿ ಅದರಲ್ಲಿ ಹೇಳಿದಂತೆಯೇ ನೆಡೆಯಬೇಕೆಂದು ನಾನು ಹೇಳುತ್ತಿಲ್ಲ ಆದರೆ ನಮ್ಮ ಪೂರ್ವಿಕರು ವೈಜ್ನಾನಿಕವಾಗಿ ಎಷ್ಟುಮುಂದುವರೆದಿದ್ದರು ಎನ್ನುವ ವಿಚಾರದತ್ತ ಗಮನ ಸೆಳೆಯುವದೇ ಈಲೆಖನದ  ಉದ್ದೆಶವಾಗಿದೆ. ವೇದ ಹಾಗೂ ಸಂಸ್ಕೃತದಲ್ಲಿ ಅಡಕವಾಗಿರುವ ಕೆಲವು ವೈಜ್ನಾನಿಕ ವಿಚಾರವನ್ನು ವೀಕ್ಷಿಸೋಣ.
೧)ಮಿತ್ರೋದಾಧಾರ ಪ್ರಥಿವಿ ಮುತದ್ಯಾಮ್| ಮಿತ್ರ ಕೃಷ್ಠಿಃ|(ತೈತ್ತರಿಯಸಂಹಿತಾ೩.೪.೧೦ ,೩-೪ ಹೆಮ್ಮೆಯ ವಿಜ್ನಾನ ಪರಂಪರೆ)
ಸೂರ್ಯನು ಭೂಮಿಯನ್ನೂ ಖಗೋಲ ಕ್ಷೇತ್ರವನ್ನೂ ಧರಿಸಿದ್ದಾನೆ.ಆಕಾಶ ಕಾಯಗಳಿಗೆಲ್ಲಾ ಸೂರ್ಯನೇ ಅತ್ಯಂತ ಆಕರ್ಶಣೀಯ ಶಕ್ತಿ
೨)ತ್ರಿನಾಭಿಚಕ್ರಮಜರಮನರ್ವಂ ಯತ್ರೇಮಾ ವಿಶ್ವಾ ಭುವನಾನಿತಸ್ಥುಃ| ( ಋಗ್ವೇದ ೧.೧೬೪.೨ ಹೆಮ್ಮೆಯ ವಿಜ್ನಾನ ಪರಂಪರೆ)
ಆಕಾಶ ಕಾಯಗಳ ದೀರ್ಘವೃತ್ತಾಕಾರಕ ಮಾರ್ಗವು ಅವಿನಾಶಿ ಹಾಗೂ ಅಚ್ಛಿದ್ರಕಾರಿ.( ಪಾಶ್ಚಾತ್ಯ ಖಗೋಲ ಪರಂಪರೆಯಲ್ಲಿಕ
ಕೋಪರ್ನಿಕಸ್ ನ ಕಾಲದವರೆಗೂ(೧೪೭೩-೧೫೪೩)ಗ್ರಹಗಳು ಮತ್ತು ಬೇರೆ ಆಕಾಶಕಾಯಗಳು ವರ್ತುಲ ಕಕ್ಷೆಯಲ್ಲಿಯೇ ಚಲಿಸುತ್ತವೆಂದು ನಂಬಲಾಗಿತ್ತು.ಜೊಹಾನ್ಸ್ ಕೆಪ್ಲರನು ೧೬೦೯ರಲ್ಲಿ ಗ್ರಹಗಳು ಮತ್ತು ಬೇರೆ ಆಕಾಶಕಾಯಗಳ ಭ್ರಮಣ ಮಾರ್ಗವು ದೀರ್ಘವೃತ್ತಾಕಾರಕವಾದುದು ಎಂದು ಪ್ರತಿಪಾದಿಸಿದನು.
೩)ಆಯಂ ಗೌಃ ಪೃಶ್ನಿರಕ್ರಮೀದಸನ್ ಮಾತರಂ ಪುನಃ | ಪಿತರಂ ಚ ಪ್ರಯಂತ್ಸುವಃ|( ಋಗ್ವೇದ ೧೦.೧೮೯.೧ ತೈತ್ತರಿಯಸಂಹಿತಾ ೧.೫.೩-೨ ಹೆಮ್ಮೆಯ ವಿಜ್ನಾನ ಪರಂಪರೆ)
ಭೂಮಿಯ ಉಪಗ್ರಹವಾದ ಚಂದ್ರನು ತನ್ನ ಮಾತೃಗ್ರಹವಾದ ಭೂಮಿಯ ಸುತ್ತಲೂ ಸುತ್ತುತ್ತಾನೆ. ಹಾಗೆಯೇ ಸ್ವಯಂ ಪ್ರಕಾಶಿಯಾದ ಪಿತೃಗ್ರಹವಾದ ಸೂರ್ಯನನ್ನೂ ಸುತ್ತುತ್ತಾನೆ.
೪)ಛಾದಯತಿ ಶಶೀ ಸೂರ್ಯಂ ಶಶಿನಂ ಮಹತೀ ಚ ಭೂಚ್ಛಾಯಾ -(ಆರ್ಯಭತಟೀಯ,ಗೋಲಪಾದ ೩೭{ಕೃಶ ೪೯೯}
ಹೆಮ್ಮೆಯ ವಿಜ್ನಾನ ಪರಂಪರೆ)
ಚಂದ್ರನು ಸೂರ್ಯನನ್ನು ಆವರಿಸುತ್ತಾನೆ ಹಾಗೂ ಭೂನಿಯ ಮಹಾಛಾಯೆಯು ಚಂದ್ರನನ್ನು ಆವರಿಸುತ್ತದೆ. ಆರ್ಯಭಟನು ಸಾವಿರಾರು ವರ್ಷದ ಹಿಂದೆಯೇ ಗ್ರಹಣರಹಸ್ಯವನ್ನು ತೆರೆದು ತೋರಿಸಿದ್ದಾನೆ.
೫)ಆಕೃಷ್ಟಿಶಕ್ತಿಶ್ಚ ಮಹೀ ತಯಾತತ್ ಖಸ್ಥಂ ಗುರು ಸ್ವಾಭಿಮುಖಂ ಸ್ವಶಕ್ತ್ಯಾ|
ಆಕೃಷ್ಯತೇ ತತ್ಪತತೀವ ಭಾತಿ ಸಮೇ ಸಮಂತಾತ್ ಕ್ವ ಪತಿತ್ವಿಯಂ ಖೆ||( ಸಿದ್ದಾಂತ ಶಿರೋಮಣಿ,ಭುವನಕೋಶಃ-೬ [೫೨೮]
ಹೆಮ್ಮೆಯ ವಿಜ್ನಾನ ಪರಂಪರೆ)
ಭೂಮಿಯು ಆಕರ್ಷಣಶಕ್ತಿಯಿಂದ ಕೂಡಿದ್ದು ಅದರಿಂದ ಆಗಸದಲ್ಲಿರುವ ದೊದ್ಡ ಪದಾರ್ಥಗಳು ಬಲವಾಗಿ ತನ್ನೆಡೆಗೆ ಆಕರ್ಷಿಸಲ್ಪಡುತ್ತವೆ. ಅವು ನಮಗೆ ಬಿಳುತ್ತಿವೆಯೆಂಬಂತೆ ಭಾಸವಾಗುತ್ತವೆ. ಆದರೆ ಎಲ್ಲೆಡೆಯೂ ನಿರಾಧಾರವಾಗಿ ಸಮನಾಗಿರುವ ಆಕಾಶದಲ್ಲಿ ಇದು ಎಲ್ಲಿ ತಾನೆ ಬೀಳಲು ಸಾದ್ಯ?
ಇಸಾಕ್ ನ್ಯುಟನ್ ನು [೧೬೪೨-೧೭೨೧]ಇದೇ ಗುರುತ್ವಾಕರ್ಷಣ ಶಕ್ತಿಯ ನಿಯಮಗಳನ್ನು ಪ್ರತಿಪಾದಿಸಿಯೇ ಖ್ಯಾತಿ ಪಡೆದದ್ದು!
ಇವಲ್ಲದೆ ಇನ್ನೂ ಅನೇಕ  ಖಗೋಳ ಶಾಸ್ತ್ರ ವಿಚಾರಗಳು ನಮ್ಮ ವೇದ ಹಾಗೂ ಸಂಸ್ಕೃತ ಸಾಹಿತ್ಯಗಳಲ್ಲಿ ಅಡಕವಾಗಿವೆ. ಇನ್ನು ಯಂತ್ರ ವಿಮಾನ ಇತ್ಯಾದಿ ವಿಚಾರವನ್ನ ನೋಡೋಣ........
 ೧) ದಂಡೈಶ್ಚಕ್ರೈಶ್ಚ ಸರಣಿಭ್ರಮಣಾದಿಭಿಃ|ಶಕ್ತೇರುತ್ಪಾದನಂ ಕಿಂ ವಾ ಚಾಲನಂ ಯಂತ್ರಮುಚ್ಚತೇ||(ಯಂತ್ರಾರ್ಣವ ೧೪ನೆ ಶತಮಾನ ಹೆಮ್ಮೆಯ ವಿಜ್ನಾನ ಪರಂಪರೆ)
ಚಾಲಕದಂಡ,ಬೆಣೆ ಅಥವಾ ಚಕ್ರಗಳ ಚಾಲನೆ ಅಥವಾ ನಿರಂತರ ಭ್ರಮಣೆಯಿಂದ ಶಕ್ತಿಯನ್ನು ಉತ್ಪಾದಿಸುವ ವ್ಯವಸ್ಥೆಯುಳ್ಳ ಸಾಧನವನ್ನೆ ಯಂತ್ರ ಎನ್ನುತ್ತಾರೆ.
ಹೇಗಿದೆನೋಡಿ ಯಂತ್ರದ ವ್ಯಾಖ್ಯೆ..
೨)ಷೋಡಶಾಂಗುಲವಿಸ್ತೀರ್ಣೊ ಹಸ್ತಮಾತ್ರಾಯತಂ ಸಮಂ ಧಾತುಸತ್ವ ನಿಪಾತಾರ್ಥೇ ಕೋಷ್ಠೀಯಂತ್ರಮಿತಿ ಸ್ಮೃತಂ|
ಪರಿಪೂರ್ಣದೃಢಾಂಗಾರೈರಧೋವಾತೇನ ಕೋಷ್ಠಕೇ ಮಾತ್ರಯಾ ಜ್ವಾಲಮಾರ್ಗೇಣ ಜ್ವಾಲಯೇಚ್ಚ ಹುತಾಶನಂ||-  -ರಸಸಮುಚ್ಚಯ ೯~೪೩. ೧೨ನೆ ಶತಮಾನ
೧೬ಹಸ್ತ ಅಗಲ ಹೊಂದಿರುವ,೧೮ ಅಂಗುಲ ಉದ್ದ ಹಾಗೂ ಎತ್ತರ ಹೊಂದಿರುವ,ಎಲ್ಲಾಕಡೆಯಲ್ಲೂ ಸಮಾನವಾಗಿರುವ ಕುಲುಮೆಯನ್ನು ಕೋಷ್ಠೀಯಂತ್ರವೆನ್ನುವರು.ಅದಿರು ಹಾಗೂ ಖನಿಜದಿಂದ ಶುದ್ದ ಲೋಹವನ್ನು ಬೇರ್ಪದಿಸಲು ಈ ಉಪಕರಣವನ್ನು ಉಪಯೋಗಿಸಲಾಗುವದು

ಭರದ್ವಾಜ ಮುನಿಯ ವ್ಯೋಮಶಾಸ್ತ್ರದಲ್ಲಿ ೩೬ ಬಗೆಯ ವಿಮಾನವನ್ನೂ,ವಿಮಾನಚಾಲಕರು ಅನುಸರಿಸಬೇಕಾದ ನಿಯಮಗಳನ್ನೂ ಬರೆದಿರುತ್ತಾರೆ.                     
                                                                                                  ಮುಂದುವರೆಯುವದು.......